ಲಕ್ಷೇಶ್ವರ, ಫೆ.2, ಗದಗ ಜಿಲ್ಲೆದ್ಯಾಂತ ಅಲ್ಲದೇ ಲಕ್ಷೇಶ್ವರ ತಾಲೂಕಿನಲ್ಲಿ ನಡೆಯುತ್ತಿರುವ ಆಕ್ರಮಗಳು ಕಲ್ಲು ಗಣಿಗಾ- ರಿಕೆ, ಕೆರೆಗಳಲ್ಲಿ ಮಣ್ಣಿನ ಲೂಟಿ, ಆಕ್ರಮ ಮರಳು ದಂಧೆ, ಹೀಗೆ ಹೇಳುತ್ತಾ ಹೋದರೆ ಹಲವಾರು ವಿಚಾರಗಳೂ ಪ್ರಸ್ತಾಪವಾಗುತ್ತವೆ. ಇದಕ್ಕೆ ಸಂಬಂಧಪಟ್ಟಂತೆ ಲಕ್ಷೇಶ್ವರ ಹೇಳಿ ಕೇಳಿ ಗದಗ ಜಿಲ್ಲೆಯಲ್ಲಿ ದೊಡ್ಡ ಪಟ್ಟಣವಾಗಿದೆ. ಇಲ್ಲಿ ನಡೆಯುವ ಅಕ್ರಮಗಳಿಗೆಲ್ಲಾ ಪೋಲೀಸರನ್ನೆ ದೂರುವುದು ಯಾವ ನ್ಯಾಯ.
ಹಾಗೂ ನಮ್ಮ ತಾಲೂಕಿನಿಂದ ಹೋರ ಜಿಲ್ಲೆ ಮತ್ತು ರಾಜ್ಯಗಳಿಗೆ ಅಕ್ಕಿ ಸಾಗಾಣಿಕೆಗೆ ಸಂಬಂಧಪಟ್ಟ ಆಹಾರ ಇಲಾಖೆ ಅಧಿಕಾರಿಗಳು ಚರ್ಚೆಯಾಗುತ್ತಿರುವ ವಿಷಯ, ಕೂಡ ಕುಚ್ಚಿ ಕುಳಿತಿದ್ದಾರೆ
ಇಲ್ಲಿ ಬೇರೆ ಇಲಾಖೆಗಳ
ಪಾತ್ರವೇನು ಇಲ್ಲವೇ ಎಂಬುದು
ಸಾರ್ವಜನಿಕ ವಲಯದಲ್ಲಿ
ಕೇಂದ್ರದಲ್ಲೇ ಇರಬೇಕೆಂದು ತಾಕೀತು ಮಾಡಲಾಗಿದೆ. ತಾಲೂಕಿನಲ್ಲಿ ನಡೆಯುತ್ತಿರುವ ಆಕ್ರಮ ಕಲ್ಲು ಗಣಿಗಾರಿಕೆ,ಅಕ್ರಮ ಮರಳು ಮಾರಾಟ, ಅಕ್ರಮ ಮಣ್ಣು ಸಾಗಾಣಿಕೆಗೆ ಇಲ್ಲಿನ ಗಣಿ ಇಲಾಖೆ ಬಾಹ್ಯ ಬೆಂಬಲ ನೀಡುತ್ತಿದೆ. ಹಾಗೂ ಇದಕ್ಕೆ ಸಂಬಂಧಪಟ್ಟಂತೆ ಕಂದಾಯ ಇಲಾಖೆ ಗ್ರಾಮ ಸೇವಕರಿಂದ ಹಿಡಿದು ಮೇಲ್ವರ್ಗದ ಅಧಿಕಾ- ರಿಗಳು ಕೂಡ ಬಾಹ್ಯ ಬೆಂಬಲ ನೀಡುತ್ತಿದ್ದಾರೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ.
ಇದಕ್ಕೆ ಇವರ ಬಾಹ್ಯ ಬೆಂಬಲ ಕೂಡ ಇದೆ ಇನ್ನೂ ಕಾಡು ಪ್ರಾಣಿಗಳ ಬೇಟೆ ಇದಕ್ಕೂ ಕೂಡ ಅರಣ್ಯ ಇಲಾಖೆಯ ಕೆಲವು ನೌಕರರ ಬಾಹ್ಯ ಬೆಂಬಲವನ್ನು ತಳ್ಳಿಹಾಕುವಂತಿಲ್ಲ. ಇದಷ್ಟಲ್ಲದೇ, ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟಗಳಿಗೆ ಮದ್ಯದ ಅಂಗಡಿ ಸರ್ವೇ ಮಾಲೀಕರ ಜೊತೆ ಅಬಕಾರಿ ಇಲಾಖೆ ಕೂಡ ಕೈ ಜೋಡಿಸಿದೆ. ಅದನ್ನೂ ತಳ್ಳಿಹಾಕುವಂತಿಲ್ಲ.
ಹೀಗೆ ಇನ್ನಿತರ ಕೆಲವೊಂದು ವಿಚಾರಗಳಿಗೆ ಸಂಬಂಧಪಟ್ಟಂತೆ ಆಯಾ ಇಲಾಖೆಗಳು ಕೂಡ ಇದರ ಜವಾಬ್ದಾರಿಯನ್ನು ಹೋರಬೇಕು.
ಆದರೆ ಸಾರ್ವಜನಿಕರ ದೃಷ್ಟಿಯಲ್ಲಿ ಎಲ್ಲಾ ಆಕ್ರಮಗಳಿಗೂ ಪೊಲೀಸರನ್ನೆ ಹೋಗಿ ಮಾಡುವುದು ಸಾಮಾನ್ಯವಾಗಿದೆ. ಇದರಲ್ಲಿ ಬೇರೆ ಇಲಾಖೆಗಳ ಪಾತ್ರ ಇದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.
BPN ಸುದ್ಧಿ